Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಪ್ಯಾನ್ ಇಂಡಿಯಾ ರಾಖಿ ಭಾಯ್ ಈಗ ನಮ್ಗೆ ಸಿಗಲ್ಲ ಬಿಡಿ ಎಂದ ನಿರ್ದೇಶಕ ನಾಗೇಂದ್ರ ಅರಸ್.!

Posted on January 10, 2024 By Admin No Comments on ಪ್ಯಾನ್ ಇಂಡಿಯಾ ರಾಖಿ ಭಾಯ್ ಈಗ ನಮ್ಗೆ ಸಿಗಲ್ಲ ಬಿಡಿ ಎಂದ ನಿರ್ದೇಶಕ ನಾಗೇಂದ್ರ ಅರಸ್.!

 

ರಾಕಿಂಗ್ ಸ್ಟಾರ್ ಯಶ್ (Rocking Star) ಇಡೀ ದೇಶ ಈಗ ಇವರನ್ನು ಇದೇ ಹೆಸರಿನಲ್ಲಿ ಗುರುತಿಸುತ್ತಿದೆ. KGF ಸರಣಿಗಳ ಮೂಲಕ ಭಾರತದಾದ್ಯಂತ ಕನ್ನಡದ ಕಂಪನ್ನು ಪಸರಿಸಿ ಸ್ಯಾಂಡಲ್ವುಡ್ ಗೌರವನ್ನು ವಿಶ್ವದಾದ್ಯಂತ ಪಸರಿಸಿದ ಇವರನ್ನು ಇಂದು ತೆರೆ ಮೇಲೆ ನೋಡುವುದೇ ಹಬ್ಬ. ಅದಕ್ಕಾಗಿ ಎರಡು ಮೂರು ವರ್ಷಗಳಾದರು ಕಾಯುತ್ತಾರೆ ಅಭಿಮಾನಿಗಳು.

ಹಾಗೆ ಅಭಿಮಾನಿಗಳ ನಿರೀಕ್ಷೆಗೆ ನಿರಾಸೆ ಮಾಡಬಾರದು ಎಂದು ಬಹಳ ಸಮಯ ತೆಗೆದುಕೊಂಡರೂ ಅಂತಹದೇ ಪ್ರಾಜೆಕ್ಟ್ ಗಳ ಮೂಲಕವೇ ಮತ್ತೆ ರಾರಾಜಿಸುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಸದ್ಯಕ್ಕಿಗ ಯಶ್ ಅವರು ರಾಖಿ ಭಾಯ್ ಎಂದರೆ ಬಹಳ ಬೇಗ ಜನರಿಗೆ ಅರ್ಥ ಆಗುತ್ತದೆ ಎಂದೂ ಹೇಳಬಹುದು, ಆದರೆ ಈ ರಾಖಿ ಭಾಯ್ ಕಾಕತಾಳೀಯದಂತೆ ತಾವು ಮೊದಲಿಗೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಸಿನಿಮಾ ಹೆಸರು ಕೂಡ ರಾಖಿ (Yash’s Rocky Movie) ಎನ್ನುವುದೇ ಆಗಿತ್ತು.

ಕಲಾವಿದನೇ ಆಗಬೇಕು ಎನ್ನುವ ಉದ್ದೇಶದಿಂದ ಎಜುಕೇಶನ್ ಮುಗಿಸಿ ರಂಗಭೂಮಿ ಸೇರಿಸಿಕೊಳ್ಳಲು ಗಾಂಧಿನಗರದ ಕಡೆ ಪಯಣ ಬೆಳೆಸಿದ್ದರು. ಯಶ್ ಅವರು ಬೆನಕ ರಂಗಭೂಮಿ ಬಳಿಕ ಅನೇಕ ಧಾರಾವಾಹಿಗಳಲ್ಲಿ ಸಹಕಲಾವಿದನಾಗಿ ಕೆಲಸ ಮಾಡಿದ್ದರು ಸಿನಿಮಾದಲ್ಲಿ ಕೂಡ ಆರಂಭದಲ್ಲಿ ನಾಯಕನ ಪಾತ್ರ ಸಿಕ್ಕಿರಲಿಲ್ಲ.

ಜಂಭದ ಹುಡುಗಿ ಹಾಗೂ ಮೊಗ್ಗಿನ ಮನಸ್ಸು ಸಿನಿಮಾಗಳಲ್ಲಿ ಸಿಕ್ಕ ಪಾತ್ರವನ್ನು ಅದ್ಭುತವಾಗಿ ನಟಿಸಿ ತಮ್ಮನ್ನು ಪ್ರೂವ್ ಮಾಡಿಕೊಂಡಿದ್ದರು. ಅಂದು ಆ ಪಾತ್ರಗಳಲ್ಲಿ ಅವರ ಕಲೆಯನ್ನು ಗುರುತಿಸಿದ ಕನ್ನಡದ ಹೆಸರಾಂತ ಖಳನಾಯಕ ಸುಂದರ ಕೃಷ್ಣ ಅರಸ್ ರವರ ಪುತ್ರ ನಾಗೇಂದ್ರ ಅರಸ್ (Director Nagendra Aras) ತಾವು ಯಶ್ ಅವರಿಗೆ ನಿರ್ದೇಶನ ಮಾಡಬೇಕು ಎಂದು ನಿರ್ಧರಿಸಿ ರಾಖಿ ಎನ್ನುವ ಸಿನಿಮಾವನ್ನು ತಯಾರಿಸಿದರು, ಆ ಸಿನಿಮಾದಲ್ಲಿ ಯಶ್ ಅವರ ಹೆಸರು ಕೂಡ ರಾಖಿ ಎನ್ನುವುದೇ ಆಗಿತ್ತು.

ಇದಾದ ಬಳಿಕ ಬರೋಬ್ಬರಿ 10 ರಿಂದ 12 ವರ್ಷಗಳ ಬಳಿಕ ಇದೇ ರಾಖಿ ಭಾಯ್ ಹೆಸರು ಈಗ ಎಲ್ಲರ ಬಾಯಲ್ಲಿ ಗುಣುಗುತ್ತಿದೆ ಈ ಬಗ್ಗೆ ನಾಗೇಂದ್ರ ಕೃಷ್ಣ ಅವರ ಎಷ್ಟು ಹೆಮ್ಮೆ ಆಗುತ್ತದೆ ಎಂದು ಸಂದರ್ಶನ ಒಂದರಲ್ಲಿ ಕೇಳಿದಾಗ ಅವರು ಇಂದು ನಮ್ಮ ರಾಕಿ ಭಾಯ್ ನಮ್ಮ ಕೈಗೆ ಸಿಗದಷ್ಟು ಬೆಳೆದಿದ್ದಾರೆ ಬಿಡಿ ಆದರೆ ಅವರು ಅದೇ ರೀತಿ ಇರಬೇಕು ಎಂದು ಆಸೆ.

ನಮ್ಮ ಭಾಷೆಯವರಿಗೆ ಗೊತ್ತಿರುತ್ತದೆ ಎಂದುಕೊಂಡಿರುತ್ತೇವೆ. ಬೇರೆ ಭಾಷೆಯವರಿಂದಲೂ ಕೂಡ KGF ಸಂದರ್ಶನಗಳಲ್ಲಿ ಈ ರೀತಿ ಪ್ರಶ್ನೆ ಎದುರಾಗಿದೆ. ಅಲ್ಲಿಯೂ 2008ರಲ್ಲಿ ರಾಖಿ ಸಿನಿಮಾದಲ್ಲಿ ಅದೇ ಹೆಸರಿನಿಂದ ಗುರುತಿಸಿಕೊಂಡದ್ದೀರಿ ಎಂದು ಹೇಳುವಾಗ ಎಷ್ಟು ಹೆಮ್ಮೆ ಆಗುತ್ತದೆ ಎನ್ನುವುದನ್ನು ವಿವರಿಸಲು ಅಸಾಧ್ಯ.

ಮಗ ಡಿಸ್ಟ್ರಂಕ್ಷನ್ ನಲ್ಲಿ ಪಾಸಾದಾಗ ಊರವರೆಲ್ಲ ಬಂದು ಮಾತನಾಡಿಸಿ ಕೇಳುವಾಗ ಎಷ್ಟು ಖುಷಿಯಾಗುತ್ತದಯೋ ಅಷ್ಟೇ ಖುಷಿ ಒಬ್ಬ ಹೀರೋ ಲಾಂಚ್ ಮಾಡಿದ ನಿರ್ದೇಶಕರಿಗೂ ಆತ ಈ ಮಟ್ಟಕ್ಕೆ ಬೆಳೆದು ಹೆಸರು ಮಾಡಿದಾಗ ಆಗುತ್ತದೆ. ನಿರ್ದೇಶಕ ಎಂದೂ ತಂದೆ ಇದ್ದಂತೆ ನಿರ್ಮಾಪಕ ತಾಯಿಯಾದರೆ ಸಿನಿಮಾ ತಂಡ ಫ್ಯಾಮಿಲಿ ಇದ್ದಂತೆ.

ನಮ್ಮ ಇಡೀ ಸಿನಿಮಾ ತಂಡ ಅವರ ಜೊತೆ ಯಾರೆಲ್ಲಾ ಯಾವುದೇ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೋ ಎಲ್ಲರೂ ಕೂಡ ನನ್ನ ಜೊತೆ ಕೆಲಸ ಮಾಡಿದ್ದ ಹುಡುಗ ಈ ಎತ್ತರಕ್ಕೆ ಬೆಳೆದಿದ್ದಾನೆ ಎಂದು ಬಹಳ ಸಂತೋಷ ಪಡುತ್ತಾರೆ. ನನಗೂ ಕೂಡ ಎಲ್ಲೆಲ್ಲಾ ಅವರ ರಾಖಿ ಸಿನಿಮಾ ಎನ್ನುವ ಪದ ಕೇಳುತ್ತದೆ ಆಗ ಬಹಳ ಹೆಮ್ಮೆ ಆಗುತ್ತದೆ, ಬಹಳ ದೊಡ್ಡ ಸಮಾಧಾನ ಅದು ಎಂದು ಸಂತಸ ಪಟ್ಟಿದ್ದಾರೆ.

cinema news

Post navigation

Previous Post: ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ಕನ್ನಡತಿ ನಟಿ ಪ್ರಣೀತಾ.! ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.!
Next Post: ಅಪ್ಪು ನಟಿಸಿಬೇಕಿದ್ದ ಸಿನಿಮಾದಲ್ಲಿ ಬಣ್ಣ ಹಚ್ಚಿದ ರಾಘವೇಂದ್ರ ರಾಜ್‌ಕುಮಾರ್.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme